Pages

Wednesday, December 8, 2010

ಮರಳು ಭುಮಿಯಲ್ಲೊಂದು ಅಭಿವೃಧ್ಹಿಯ ಓಯಸಿಸ್

ರಾಜಸ್ಥಾನದ ಚುರು ಮತ್ತು ವಾಗುರ್ ಜಿಲ್ಲೆಗಳಲ್ಲಿ ಥಾರ್ ಮರುಭೂಮಿ ಹರಡಿಕೊಂಡಿದೆ. ಇಲ್ಲಿ ಗಿಡ ಮರಗಳು ಎಲೆಗಳನ್ನು ಕಳೆದುಕೊಂಡು ಅಂತರ್ಜಲದ  ಮಟ್ಟ ಬಹಳ ಕೆಳೆಗಿಳಿದು ನೀರೆಲ್ಲ ಉಪ್ಪಾಗಿದೆ. ಈ ನಾಡಿನಲ್ಲಿ ಒಂಟೆಗಳು ಮತ್ತು ಚಿಂಕಾರಗಳಂತ  ಪ್ರಾಣಿಗಳಷ್ಟೇ ಕಂಡು ಬರುತ್ತವೆ. ಇಂತಹ ಪ್ರದೇಶದಲ್ಲಿ ಭಾರತದಲ್ಲಿ ಅತ್ಯಂತ ಅಭಿವೃದ್ಧಿಯಲ್ಲಿ ಯಶಸ್ಸನ್ನು  ಸಾಧಿಸಿರುವ ಗ್ರಾಮ ಪಂಚಾಯತ್ ಇದೆಯಂದರೆ ನಂಬಲು ಅಸಾಧ್ಯವೆನಿಸಬಹುದು. ಇದುವರೆಗೂ ರಾಜ್ಯ ಸರ್ಕಾರದಿಂದ  ಹೆಚ್ಚೇನು ಸಹಾಯ ದೊರೆಯದಿದ್ದರು ರಾಜಕಾರಣಿಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವ ತಾಣವಾಗಿ ಗ್ರಾಮ ಪಂಚಾಯತ್ಗಳು ಕಾರ್ಯನಿರ್ವಹಿಸುತ್ತಿದ್ದವು  . ಆದರೆ ಅತಿ ಹಿಂದುಳಿದ ಹಾಗು ತೀರ ಒಳಭಾಗದ ಗ್ರಾಮವಾದ ಗೋಪಾಲಪುರ 21 ನೆ ಶತಮಾನದಲ್ಲಿ ಮರುಭೂಮಿಯಲ್ಲಿಯ ಓಯಸಿಸ್ ನಂತೆ   ತೆಲೆ  ಎತ್ತಿ  ಸಾಧಿಸಿರುವುದು ಅತ್ಯಂತ ಮಹತ್ವದ ವಿಚಾರವಾಗಿದೆ. ರಾಜ್ಯದ ರಾಜಧಾನಿಯಾದ ಜಯಪುರದಿಂದ 200 k.m ದೂರದಲ್ಲಿರುವ ಗೋಪಾಲಪುರ ಗ್ರಾಮವು ಸುಜನಗರ್ ತಾಲೂಕಿನಲ್ಲಿರುವ 6000 ಜನಸಂಖ್ಯೆಯ ಗ್ರಾಮವಾಗಿದೆ . ಅಲ್ಲಿಯ ಜನರು ಈಗ ಸಜ್ಜೆ ಬೆಳೆಯಿಂದಲೇ ತಮ್ಮ ಜೀವನ ಸಾಗಿಸುತ್ತಾರೆ. ಕೆಲವರು ಕಲ್ಲಿನ ಕ್ವಾರಿಗಳಿಂದ ಮತ್ತು ಸಂಭಾರ್ ಸರೋವರದ ಬಯಲಿನಲ್ಲಿ ಉಪ್ಪು ತಯಾರಿಕಾ ಘಟಕಗಳಲ್ಲಿ ದುಡಿದು ಜೀವನ ನಡೆಸುತ್ತಾರೆ. ಇಂತಹ ಒಂದು ಪ್ರಾಕೃತಿಕವಾಗಿ ಏನೆಲ್ಲಾ ಕಷ್ಟಗಳಿದ್ದರೂ ಯಾರಾದರೂ  ಗೋಪಾಲಪುರಕ್ಕೆ ಭೇಟಿ ನೀಡಿದಲ್ಲಿ ಅವರ ಮನಸ್ಸಿನಲ್ಲಿ ನೊಂದಣಿಯಾಗುವುದು ಸ್ವಚ್ಚ್ಹ ಬೀದಿಗಳು, ಗೋಡೆಗಳ ಮೇಲೆ ಕಾಣುವ ಮಹತ್ವದ ಸಂದೆಶವೆಂದರೆ  " ಸೊಸೆಯಂದಿರೊಂದಿಗೆ ಓದೋಣ , ಎಲ್ಲ ಮಹಿಳೆಯರು ಸಾಕ್ಷರ ರಾಗೋಣ" ಸ್ವಚ್ಚ್ಹೆತೆಗೆ ಮಹತ್ವ ನೀಡೋಣ ಹಾಗು ಸಣ್ಣ ಕುಟುಂಬದ ಕಲ್ಪನೆಯೇ ಮಂತ್ರವಾಗಿದೆ. ಅಲ್ಲದೆ ನೀರಿಗೆ ಬಹಳ ಮಹತ್ವವನ್ನು  ನೀಡಲಾಗಿದೆ " ನೀರಿಲ್ಲದೆ ನಾಳೆ ಯಿಲ್ಲ " ಎನ್ನುವು ಘೋಷಣೆ ಎಲ್ಲರ ಮನ ಕುಲುಕುವ ವಿಷಯವಾಗಿದೆ.

ಸುವಿಚಾರದ  ಅಧ್ಯಕ್ಷೆಯ ಆಗಮನ:
ಮೇಲಿನ ಮಹತ್ವದ ವಿಚಾರಗಳನ್ನು ಹೊಂದಿರುವ ಗೋಪಾಲಪುರ ಗ್ರಾಮ ಪಂಚಾಯತ್  12 ಜನ ಸದಸ್ಯರನ್ನೋಳಗೊಂಡಿದೆ. ಇದರಲ್ಲಿ 5 ಜನ ಮಹಿಳೆಯರು, 6 ಜನ ಪರಿಶಿಷ್ಟ ಜಾತಿಯವರಾಗಿರುವರು. ಇಲ್ಲಿಯ ಗ್ರಾಮ ಪಂಚಾಯತ ಅಧ್ಯಕ್ಷೆ (ಸರ್ಪಂಚ್) ಶ್ರೀಮತಿ ಸವಿತಾರತಿ, ಸುಜನಗರ್ ನಲ್ಲಿರುವ ಒಂದು ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯಕರ್ತೆಯಾಗಿದ್ದಳು, ಅಧ್ಯಕ್ಷೆಯಾದ ಎರಡುವರೆ ವರ್ಷಗಳಲ್ಲಿ ಗ್ರಾಮದ ನೋಟವನ್ನೇ ಬದಲಾಯಿಸಿರುವ ಖ್ಯಾತಿಗೆ  ಪಾತ್ರಳಾಗಿರುವಳು. ಗ್ರಾಮ ಪಂಚಾಯಿತ ಚುನಾವಣಾ ಸಮಯದಲ್ಲಿ ಗ್ರಾಮದ ಯಾವುದೇ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರಿಂದ ಬಹಳಷ್ಟು ದೂರುಗಳಿದ್ದವೆಂದು ಈಗಿನ ಗ್ರಾಮ ಪಂಚಾಯತ ಸರಪಂಚೆಯಾಗಿರುವ ಶ್ರೀಮತಿ ಸವಿತಾರತಿ ಮುಗುಳ್ನಗೆಯೊಂದಿಗೆ ಹೇಳುತ್ತಾಳೆ. " ಈ ಗ್ರಾಮದ ಗಂಡು ಮಕ್ಕಳಿಗೆ ಹೆಣ್ಣು ಕೊಡುತ್ತಿರಲ್ಲಿಲ್ಲ . ಕಾರಣ ಈ ಗ್ರಾಮೆಕ್ಕೆ ಇರುವುದು  ಕಷ್ಟದ ಹಾದಿ, ಹಾಗೂ  ಅವರನ್ನು ಪುನ್ಹ ನೋಡಲು ಸಾಧ್ಯವಿಲ್ಲವೆಂದು , ಇಂದು ಇಂತಹ ಗ್ರಾಮದಲ್ಲಿ ಎರಡು ಲೇನ್  ರಸ್ತೆಇದ್ದು , ರಸ್ತೆಗಳನ್ನು ಎಲ್ಲಡೆ ತುಂಬಾ ಅಚ್ಚುಕಟ್ಟಾಗಿ ಗುಣಮಟ್ಟಕ್ಕೆ ನಿರ್ಮಿಸಲಾಗಿದೆ. ಅಲ್ಲದೆ ಅಕ್ಕ ಪಕ್ಕ ಗ್ರಾಮಗಳಿಗೆ ಹೋಗುವ ರಸ್ತೆಯನ್ನು ಸಹ ಸಮರ್ಪಕವಾಗಿ ನಿರ್ಮಿಸಲಾಗಿದೆ. ಈಗಿರುವ ಅಲ್ಲಿಯ ರಸ್ತೆಗಳ ಮೇಲ್ಮೈನ್ನು  ನಯನವಾಗಿರುವ  ಸಿನಿಮಾ ತಾರೆಯರ ಕೆನ್ನೆಗೆ  ಹೋಲಿಸಬಹುದು .

ಗ್ರಾಮದಲ್ಲಿ ರಸ್ತೆಗಳ ನಿರ್ಮಾಣದೊಂದಿಗೆ ಪ್ರಾರಂಭಿಸಿ, ನಂತರದಲ್ಲಿ ಅಂಗನವಾಡಿಗಳು, ಒಂದು ಹೊಸ ಪ್ರೌಢಶಾಲೆ  ಸಮುದಾಯ ಶೌಚಾಲಯ ಹಾಗು ಗ್ರಾಮೀಣ ಪಶು ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಕೆಲವು ಅಂತರಿಕ ರಸ್ತೆಗಳಿಗೆ ಬೀದಿ ದೀಪಗಳನ್ನು ಅಳವಡಿಸಿದ್ದಾರೆ.  ಸುರ್ವಾ ಗ್ರಾಮದಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಿಸಿ, ಅಲ್ಲಿಯ ಸ್ವರೋಜಗಾರಿಗಳಿಗೆ ವಿಶೇಷವಾಗಿ ಮಹಿಳ ಸ್ವಸಹಾಯ ಗುಂಪುಗಳು ಸ್ಥಳೀಯ ಕಲೆಗಳಾದ ವಿವಿಧ ತರದ ಬ್ಯಾಗ್ ಗಳ ತಯಾರಿಕೆ , ಬಾಗಿಲು ತೋರಣಗಳ ತಯಾರಿಕೆಯನ್ನು ಸ್ಥಳಿಯವಾಗಿ ದೊರೆಯುವ ಹುಲ್ಲಿನಿಂದ ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡು ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೊದಲು ಅಲ್ಲಿಯ ಮಹಿಳೆಯರು  ಸ್ಥಳೀಯ ಉಪ್ಪು ತಯಾರಿಕ ಘಟಕಗಳಲ್ಲಿ ದಿನವಿಡೀ ದುಡಿದು ಕೇವಲ ರೂ.30 ದಿನಗೂಲಿ ಪಡೆಯುತ್ತಿದ್ದರು.

ಈಗ  ಗೋಪಾಲಪುರ ಗ್ರಾಮ ಪಂಚಾಯತಿ ಕಟ್ಟಡ ವನ್ನು ಪುನರ್ ನಿರ್ಮಾಣ ಮಾಡಲಾಗಿದೆ ಹಾಗು ಒಂದು  ಕಂಪ್ಯೂಟರ್ ಕೊಠಡಿ ಮತ್ತು ಸಭಾ ಭವನ ನಿರ್ಮಿಸಲಾಗಿದೆ. ಅಲ್ಲಿ ತಿಂಗಳಿಗೆ ಎರಡು ಬಾರಿ ಸಭೆಗಳನ್ನು ಜನರ ಸಮ್ಮುಖದಲ್ಲಿ  ನಡೆಸುತ್ತಾರೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಸೌಲಭ್ಯ  ಹೊಂದಿರುವುದು ಗಮನಾರ್ಹ, ಇದರಿಂದ ಟೆಲಿಕಾನ್ಫೆರನ್ಸೆ ಮುಖಾಂತರ ಪಟ್ಟಣದಲ್ಲಿರುವ ತಜ್ಞ್ಯ ವೈದ್ಯರನ್ನು ಸಂಪರ್ಕಿಸಿ ಗ್ರಾಮ ವಾಸಿಗಳಿಗೆ ತಜ್ಞ್ಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಗೋಪಾಲಪುರದ ಗ್ರಾಮದ ಮಧ್ಯದಲ್ಲಿರುವ 400 ವರ್ಷಗಳಷ್ಟು ಹಳಯೆದಾದ "ದ್ರೋಣ ಪರ್ವತ ಸಂಕಲ "ದಲ್ಲಿರುವ ಮಂದಿರವನ್ನು ರೂ.20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಎಲ್ಲದಕ್ಕೂ ಮುಖ್ಯವಾದದ್ದು ನೀರು , ಇಲ್ಲಿ ಅದು ಬಹಳ ವಿರಳ "ನೀರಿಲ್ಲದೆ - ನಾಳೆಯಿಲ್ಲ " ಎನ್ನುವ ಉಕ್ತಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿಯ ಅಂತರ್ಜಲದ  ನೀರಿನಲ್ಲಿ ಉಪ್ಪಿನದೆ ಸಮಸ್ಯೆ. ಆದುದರಿಂದ ಅಲ್ಲಿಯ ಜನರು ಬಹಳ ಶ್ರದ್ದೆಯಿಂದ ಸಿಹಿ ನೀರನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ್ದಾರೆ. ಬೆಟ್ಟದ ಮೇಲಿರುವ ದೇವಸ್ಥಾನದ ಪಕ್ಕದಲ್ಲಿ ದೊಡ್ಡ ಕೆರೆಯಿದೆ, ಮೊದಲು ಈ ಕೆರೆಯನ್ನು ಸಿಹಿ ನೀರು, ಅಂದರೆ ಮಳೆಯ ನೀರನ್ನು ಸಂಗ್ರಹಿಸಲು ನಿರ್ಮಿಸಿದ್ದರು, ಆದರೆ ಅಕ್ರಮವಾಗಿ ನಡೆಯುವ ಗಣಿಗಾರಿಕೆ ಯಿಂದ ಕೆರೆಯಲ್ಲಿ ನೀರಿಲ್ಲದೆ ಒಣಗಿದ  ಅಂಗಳದಂತಾಗಿದೆ , ಸ್ಥಳೀಯ ಜನರು ಕೆರೆಯ ಮೈದಾನವನ್ನು ಫುಟ್ಬಾಲ್ ಆಡಲು  ಯೋಗ್ಯವೆಂದು ತಮಾಷೆ ಮಾಡುತಿದ್ದರು.  ಆದರೆ ಗ್ರಾಮ ಪಂಚಾಯಿತಯ  ದಿಟ್ಟ ನಿರ್ಧಾರದಿಂದ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಈಗ ಮಳೆಯಿಂದ ಕೆರೆ ತುಂಬಿ ತುಳುಕುತ್ತಿದ್ದು ಅಲ್ಲಿಯ ನೀರನ್ನು ಬೇರೆಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಇಂತಹ ಅಚಲ ನಿರ್ಧಾರಗಳಿಂದ ಇಂದು ಕೆರೆಯು ಅಪೂರ್ವವಾದ ಕುಡಿಯುವ ನೀರಿನ ರಕ್ಷಣಾ ತಾಣವಾಗಿದೆ.

ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಒಂದು ರೀತಿಯ ಧರ್ಮಯುದ್ಧವೇ ಸರಿ . ಆದರೆ ಮತ್ತೊಂದು ಸಮರವೆಂದರೆ  ಮಾನವ ಸಂಪನ್ಮೂಲ ಅಭಿವೃದ್ಧಿ ಗ್ರಾಮದಲ್ಲಿ ಅಳವಡಿಸಿರುವ ಇಂಟರ್ ನೆಟ್ ಉಪಯೋಗಿಸುವವರು  ಯಾರು  ?  ಅದಕ್ಕಾಗಿ ಗ್ರಾಮ ಪಂಚಾಯಿತ ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ "ಅನಕ್ಷರಸ್ಥ ಮಹಿಳೆಯರು ಇರುವುದಿಲ್ಲ " ಎಂಬ ಕೂಗನ್ನು ಹುಟ್ಟು ಹಾಕ್ಕಿದ್ದಾರೆ. ಅಲ್ಲಿಯ ಹೆಣ್ಣು ಮಕ್ಕಳ ಶಾಲೆಯನ್ನು 12 ನೆ ತರೆಗತಿಯವರೆಗೆ ಮಲ್ದರ್ಜೆ ಗೆರೀಸಿ  , ಸಹ ಶಿಕ್ಷಣವನ್ನು 10 ನೆ ತರೆಗತಿವರೆಗೆ ವಿಸ್ತರಿಸಿದ್ದಾರೆ. ಗ್ರಾಮ ಪಂಚಾಯತ್ ಎಲ್ಲ ಕುಟುಂಬದವರಲ್ಲಿ ತಿಳುವಳಿಕೆಯನ್ನು ನೀಡಿ ಶೇ 90 % ರಷ್ಟು ಹೆಣ್ಣುಮಕ್ಕಳು ಇಂದು ಸಾಕ್ಷರ ರಾಗುವ  ಪ್ರಗತಿ ಪಥದಲ್ಲಿದ್ದಾರೆ.

ಗ್ರಾಮಗಳಲ್ಲಿ ಸ್ವಚ್ಛತೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವಿದ್ದು ಕಳೆದ ಸಾಲಿನಲ್ಲಿ ಗೋಪಾಲಪುರ ಗ್ರಾಮ ಪಂಚಯತ್ತ್ ಗೆ "ನಿರ್ಮಲ ಗ್ರಾಮ ಪುರಸ್ಕಾರ" ದೊರೆತಿದೆ. ಸಮೀಪದಲ್ಲಿರುವ "ತಲ್ ಚಪ್ಪರ್ ಕೃಷ್ಣ ಮೃಗ ಅಭಯಾರಣ್ಯ" ದ ಲಾಭ ಪಡೆಯಲು ಗ್ರಾಮದ ಕೋಟೆಯಲ್ಲಿರುವ "ಝುನೆನ ಕೊಠಡಿಗಳನ್ನು" ಪ್ರವಾಸಿಗರ ಅನುಕೂಲಕ್ಕಾಗಿ ಲಭ್ಯವಾಗಿಸಿದ್ದಾರೆ. ಇದರಿಂದ ಬರುವ ಆದಾಯ ಸಹ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರತಿಯ ಪ್ರಕಾರ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಬಲವರ್ಧನೆಗೆ ಶಾಸನಗಳನ್ನು ರೂಪಿಸಿದ್ಧರೂ ಅವುಗಳು  ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಸರ್ಕಾರದಿಂದ ದೊರೆಯುವ ಶಾಸನಬದ್ಧ ಅನುಧನ ರೂ.8 .೦೦ ಲಕ್ಷದಲ್ಲಿ ಸರ್ಕಾರದ ಮಾರ್ಗದರ್ಶನಗಳಂತೆ ಖರ್ಚು ಮಾಡಬೇಕಿರುವುದರಿಂದ ಹೆಚ್ಚೇನೂ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲವೆನ್ನುತ್ತಾರೆ. ಆದರೆ ಕೇರಳ ರಾಜ್ಯದಲ್ಲಿರುವಂತೆ ನಮ್ಮಲಿಯು ತೆರಿಗೆಯನ್ನು ಸಂಗ್ರಹಿಸಿ, ಬಳುಸುವುದಾಗಿದ್ದಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವೆನ್ನುತ್ತಾರೆ. ನಾವು ಎಷ್ಟೇ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಕೆರಳದಷ್ಟು ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಕೊರಗನ್ನು ವ್ಯಕ್ತಪಡಿಸಿದ್ದಾರೆ. ಕೇರಳ, ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಗಳು ಸ್ವತಹ ತೆರಿಗೆಯನ್ನು ವಿಧಿಸಲು ಹಾಗು ಆ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಉಪಿಯೋಗಿಸಲು ಸಾಧ್ಯವಿದೆ. ಇಲ್ಲಿಯೂ ಸಹ ಮೋಟರ್ ವಾಹನದ ಕಾಯ್ದೆ ಪ್ರಕಾರ ತೆರಿಗೆ ವ್ಯಪ್ತಿಯಲ್ಲಿಲ್ಲದ ವಾಹನಗಳಿಗೆ ತೆರಿಗೆ ವಿಧಿಸಬಹುದೆಂದಿದ್ದರು ಇಲ್ಲಿರುವ ಕೇವಲ ಒಂತೆಗಾಡಿ ಗಳೆಂದು ಅಲುಬುತ್ತಾರೆ. ಒಂದು ವೇಳೆ ಕೇರಳ , ಕರ್ನಾಟಕದಲ್ಲಿರುವಷ್ಟು ಅವಕಾಶಗಲಿದ್ದರೆ ನಾನು ಸಹ ವಿಮಾನದಲ್ಲಿ ಹರಾದುತ್ತಿದ್ದನೆಂದು ಹೇಳಿರುವುದು ಬಹಳ ಮಹತ್ವದ ಹಾಗು ಆಶ್ಚರ್ಯದ ಸಂಗತಿಯಾಗಿದೆ.

ಗ್ರಾಮ ಪಂಚಾಯತ್ಗಳಿಗೆ ಸರ್ಕಾರದಿಂದ ಬರುವ ಅನುದಾನ ವಂದನ್ನೇ ನಂಬಿಕೊಂಡಿದ್ದರೆ ಅಷ್ಟೇನು ಅಭಿವೃಧಿ ಸಾಧಿಸಲು ಸಾಧ್ಯವಾಗಲಾರದು. ಗ್ರಾಮ ಪಂಚಾಯತ್ ಅಧ್ಯಕ್ಷರು ಅಭಿವೃದ್ಧಿಪರ ಚಿಂತನೆ ಮಾಡುವವರಾಗಿದ್ದು, ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರದಿಂದ ಮಂಜುರೂ ಮಾಡಿಸುವ ಸಾಮರ್ಥ್ಯ ಹೊಂದಿದವರಾಗಿದ್ದು, ಸಂಘಟನ ಚತುರರು ಹಾಗು ಚಾಣಕ್ಯ ರಾಕಾರಣಿಗಳಾಗಿದ್ದಲ್ಲಿ ಅನೇಕ ಜನ ಪರ ಕೆಲಸಗಳನ್ನು ಮಾಡಿ ತೋರಿಸಲು ಸಾಧ್ಯವಾಗಬಹುದು. ಇಂತಹ ವ್ಯಕ್ತಿತ್ವವನ್ನು ಗೋಪಾಲಪುರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ರತಿಯವರು ಎಲ್. ಎಲ್. ಬಿ. ಓದಿದವರಾಗಿದ್ದು ಸರ್ಕಾರದ ಅಧಿಕಾರಗಳೊಂದಿಗೆ ದೆಹೆಲಿಯ ರಾಜಕಾರಣಿಗಳೊಡನೆ ಹಾಗು ಸ್ಥಳೀಯ ಮಾಧ್ಯಮಗಳೊಡನೆ ಉತ್ತಮ ಸಂಪರ್ಕವಿಟ್ಟುಕೊಂಡಿರುವುದು ಅವರ ಸಾಧನೆಗೆ ಸಹಕಾರಿಯಾಗಿದೆ.
ಶ್ರೀಮತಿ ರತಿಯವರು ದೂರದ್ರಿಷ್ಟಿಯುಳ್ಳ ಚಿಂತಕರಾಗಿದ್ದು 2005 - 25 ರ ತನಕ ಕೈಗೊಳ್ಳಬಹುದಾದ  ಅಭಿವೃದ್ಧಿ ಕೆಲಸಗಳ ಮಾಸ್ಟರ್ ಪ್ಲಾನ್ ತಯಾರಿಸಿದ್ದು , ಅದರಲ್ಲಿ ಹಂತ ಹಂತದ ಪ್ರಸ್ತಾವನೆಗಳಿದ್ದು, ಜನಗನತಿಯ ಅಂಕಿ ಅಂಶಗಳು, ನಕ್ಷೆಗಳು ಹಾಗು ಒಂದು ಗ್ರಾಮದಲ್ಲಿ ಆದರ್ಶಪ್ರಾಯವಾಗಿ ಎಷ್ಟು ಜನಸಂಖ್ಯೆಯ ಸಂದ್ರತೆಯಿರಬೇಕೆನ್ನುವ ವಿಚಾರಗಳಿವೆ. ಇದನ್ನು ಅತ್ಯುತ್ತಮವಾಗಿ ತಾಂತ್ರಿಕ ಚಿಂತನೆಯೊಂದಿಗೆ ತಯಾರಿಸುವುದು ನಂಬಿಕೆಯನ್ನು ಉಂಟುಮಾಡುವಲ್ಲಿ ಮತ್ತು ಆಶ್ಚರ್ಯಭರಿತವಾದ ಅಂಶಗಳಿಂದ ಕೂಡಿರುವುದು ಗಮನಾರ್ಹ ವಿಚಾರ. ಇದು ಎಲ್ಲರ ಮನವನ್ನು ಗೆಲ್ಲುವಂತಿದೆ.

ಸ್ಥಳೀಯ ಸಂಸ್ಥೆಗಳಿಗೆ ಸರಿಯಾದ ಮುಖಂಡತ್ವ ದೊರೆತಲ್ಲಿ ಏನೆಲ್ಲಾ ಮಾಡಬಹುದೆಂದು ಗೋಪಾಲಪುರ ಮಾದರಿಯಾಗಿದೆ. ಪ್ರಕುರ್ತಿಯ ಮನಸಿದ್ದರೂ, ಮನಸ್ಸಿನ ಮುನಿಸಿಲ್ಲದಿದ್ದರೆ ಏನೆಲ್ಲಾ ಸಾಧನೆಗಳು ಮಾಡಬಹುದೆಂದು ಸಾಧಿಸಿ ತೋರಿಸಿರುವುದು ಗೋಪಾಲಪುರ ಗ್ರಾಮ ಪಂಚಾಯತದ ಹಿರಿಮೆಯಾಗಿದೆ .ಕರ್ನಾಟಕದಲ್ಲಿರುವ  ಗ್ರಾಮ ಪಂಚಯಾತಗಳು ಇದಕ್ಕೂ ಹೆಚ್ಚಿನ ಸಾಧನೆ ಮಾಡುವ ಸ್ಪರ್ಧೆಗಿಳಿದು ಗಾಂಧೀಜಿಯವರ ಕಂಡ 'ಗ್ರಾಮ ರಾಜ್ಯದ' ಕನಸನ್ನು ರಾಮ ರಾಜ್ಯ ವಾಗಿಸುವಲ್ಲಿ ಗೋಪಾಲಪುರವನ್ನು ಸ್ಪೂರ್ತಿಯ ಸೇಲೆಯಾಗಿಸಕೊಂಡು, ನಮ್ಮ ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಚ್ಚಲವನ್ನು ಸಾಧಿಸಿದಲ್ಲಿ ನಮ್ಮ ರಾಜ್ಯ ರಾಷ್ಟ್ರಕ್ಕೆ ಮಾದರಿಯಗಬಲ್ಲದು.   

(ಕರ್ನಾಟಕ ವಿಕಾಸದಲ್ಲಿ ಪ್ರಕಟವಾದ ಲೇಖನ)

No comments:

Post a Comment