Pages

Thursday, March 10, 2011

ವಿದ್ಯುತ್ ಸಮಸ್ಯೆಗೆ ಸೌರಶಕ್ತಿಯೆ ಪರಿಹಾರ

ದೈನಂದಿನ ಬದುಕಿಗೆ ಅತಿ ಮುಖ್ಯ ವಿದ್ಯುತ್ . ಸಮಸ್ತ ನಾಗರಿಕರಿಗೆ ಮೂಲಭೂತ ವಸತಿ ,ಶಿಕ್ಷಣ ,ಕುಡಿಯುವ ನೀರು, ಪ್ರಾಥಮಿಕ ಅರೋಗ್ಯ ಹಾಗು ಇತರ ಸೌಕರ್ಯ ಗಳ ಜೊತೆಗೆ ವಿದ್ಯುತ್ ಪೂರಿಯಸುವ ಸರಕಾರದ  ಕರ್ತವ್ಯಗಳಲ್ಲೊಂದಾಗಿದೆ. ಇತೀಚಿನ ವರುಷಗಳಲೇ ವಿದ್ಯುತ್ ಇಲ್ಲದೆ ಬೇರೆ ಮೂಲಭೂತ ಸೌಕರ್ಯಗಳನ್ನು ವದಗೀಸುವುದು ಕಷ್ಟವೇನೂ ಅನ್ನುವ ಮಟ್ಟಿಗೆ ತಲುಪಿದೆ , ಏಕೆಂದರೆ ನಮ್ಮ ದಿನ ನಿತ್ಯದ ಎಲ್ಲಾ ಚಟುವಟಿಕೆಗಳು ಮತ್ತು ಕಲ್ಲಇದ್ದಿಲಿನ  ಶಾಕೊತ್ಪನ್ನ  ಕೇಂದ್ರಗಳು, ಅಣುಸ್ಥಾವರಗಳು  ಅನಿಲ ಹಾಗೂ ಕಲ್ಲಣ್ಣೆಯನ್ನು  ಉಪಯೋಗಿಸೀ ವಿದ್ಯುತ್  ಉತ್ಪಾದಿಸಲಾಗುತ್ತಿದೆ  .ಆದೆರೆ ಅವುಗಳು ನಿರೀಕ್ಷಿತ ಪ್ರಮ್ಮಣದಲ್ಲಿ ಲಭ್ಯವಿಲ್ಲದೆ ಇರುವುದಿಂದ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ  .

ಈ  ಎಲ್ಲಾ ಮೂಲಗಳು ಒಂದಲ್ಲಾ ಒಂದು ದಿನ ಬರಿದಾಗಲಿದ್ದು ಇoತಹ ಮೂಲಗಳಿಗೆ  ಪರಾಯ್ಯಾಯ ಮಾರ್ಗಗಳು ತಕ್ಷಣದಲ್ಲಿಯೇ  ಕಂಡುಕೊಳ  ಬೇಕಾದ ಪರಿಸ್ಥಿತಿ ಬಂದು ಒದಗಿದೆ .ಇತ್ತಿಚೀನ  ವರ್ಷ ಗಳಲ್ಲಿ ವಿಶ್ವಾದ್ಯಂತ ಪರಿಸರದಲ್ಲಾಗುತ್ತಿರುವ  ಜಾಗತಿಕ ತಾಪಮಾನ ,ಪರಿಸರ ಮಾಲಿನ್ಯ ,ಓಜೊನ್  ಪದರ ತಿಳುವಾಗುತಿರುವುದು ,ಹಸಿರು ಮನೆ ಅನಿಲಗಳ ಪ್ರಮಾಣ ಅದರಲ್ಲೂ ವಿಶೇಷವಾಗಿ  ಇಗಳದ ಡೈ ಆಕ್ಸೈಡ್   ಹೊರಸುಸುವಿಕೆ .ವಾತಾವರಣ ಉಷ್ಣತೆ ಹೆಚ್ಚಳದಿಂದ  ಅಂತರಜಲ ಕಡಿಮೆ ಯಾಗು ತಿರುವುದು .ಕಾಲಕಾಲಕ್ಕೆ ಸರಿಯಾಗಿ ಮಳೆ ಬೀಳದೇ ಇರುವುದು ,ರುತು ಚಕ್ರದಲ್ಲಾದ ಬದಲಾವಣಿ ,ಜೀವ ವೈವಿದ್ಯತೆಯ ನಾಶ ,ಹೆಚ್ಚಾಗುತಿರುವ ರೋಗ -ರಾಜಿನಗಳು  ಎಲ್ಲರನ್ನು  ಚಿಂತಿಸುವ ಮಾಡಿವೆ .

ಇಂದು ಇಂದು ವಿದ್ಯುತ್ ಕ್ಷೇತ್ರ ದಿಂದ ಪರಿಸರ ಮೇಲೆ ಉಂಟಾಗುತ್ತಿರುವ  ದುಷ್ಪರಿಣಾಮಗಳು ತಡೆಗಟ್ಟುವ ದ್ರಷ್ಟಿ ಯಿಂದ  ಹಾಗೂ ವಿದ್ಯುತ್ ಕೊರತೆ ಯನ್ನು  ತುಂಬಲು ನೈಸರ್ಗಿಕಾ ವಾಗಿ ದೊರೆಯುವ ನವೀಕರಿಸ ಬಹುದಾದ ಇoಧನ  ಮೂಲಗಳಾದ  ಪವನಶಕ್ತಿ , ಕಿರುಜಲ ವಿದ್ಯುತ್ ,ಜೈವಿಕ   ವಿದ್ಯುತ್,  ಸೌರ ಶಕ್ತಿ ಹಾಗೂ ಇತರ ನವಿಕರಿಸಬಹುದಾದ  ಇoದನ  ಮೂಲಗಳತ್ತಾ  ಗಮನ ಹರಿಸುವುದು ಅತ್ಯಾವಷಕವಾಗಿದೆ .ಇದರಿಂದ ಹೆಚುತಿರುವ ವಿದ್ಯುತ್ ಬೇಡಿಕೆಯನು ಪುರೈಸುವುದರ ಜೋತೆ -ಜೋತೆಗೆ ಪರಿಸರ ಸಂರಕ್ಷಣೆ  ,ಹವಾಮಾನ ಬದಲಾವಣೆಯ  ನಿಯಂತ್ರಣ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು .

ಕಳೆದ ವರ್ಷ ಡೆನ್ಮಾರ್ಕ್ ದೇಶದ ಕೊಪೆನ್ ಹೇಗನ್ನಲ್ಲಿ   ಸೇರಿದ್ದ ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣದ ಬಗ್ಗೆ ನಡೆದ ಸಮಾವೇಶದಲ್ಲೂ  ಸಹ ಹವಾಮಾನ ಬದಲಾವಣೆ  ಹಾಗೂ ಜಾಗತಿಕವಾಗಿ  ಹೆಚ್ಚಗುತಿರುವ ವಾತಾವರಣದ  ಉಷ್ಣತೆಯನ್ನು  ನಿಯಂತ್ರಿಸಲು ನವಿಕರಿಸಬಹುದಾದ ಇoಧನ ಮೂಲಗಳಿಂದ ವಿದ್ಯುತ್  ಉತ್ಪಾದಿಸವ ಬಗ್ಗೆ ಒತ್ತು  ನೀಡಲಾಗಿದೆ .ನವಿಕರಿಸಬಹುದಾದ ವಿದ್ಯುತ್ ಉತ್ಪಾದನೆ  ಪರಿಸರಸ್ನೇಹಿ ಸ್ವಶ್ಹ ಅಭಿವೃದ್ಧಿ   ತಂತ್ರಜ್ಞ್ಯಾನದಿಂದ  ಕೂಡಿದ್ದು ,ಇಂತಹ   ವಿದ್ಯುತ್ ಉತ್ಪಾದನೆಗೆ   ಹೆಚ್ಹು ಗಮನಹರಿಸುವುದು  ಅವಶ್ಯಕತೆಗಳೊಂದಾಗಬೇಕಿದೆ  . ಇವು ನೈಸರ್ಗಿಕವಾಗಿ  ಸದಾ ದೊರೆಯುವ   ನವಿಕರಿಸಬಹುದಾದ ಮೂಲಗಳಾದ  ಪವನ ಶಕ್ತಿ  , ಸೌರ ಶಕ್ತಿ ,ಸಣ್ಣ ಪ್ರಮಾಣದ  ಜಲ  ವಿದ್ಯುತ್ ಉತ್ಪಾದನೆ ,ಸಸ್ಯ ಜನ್ಯ ವಿದ್ಯುತ್ ಉತ್ಪಾದನೆ ,ಸಹ ಉತ್ಪಾದನೆ ಗಳಾಗಿದ್ದು , ಬರಿದಾಗದ ಇರುವ ಇoಧನ ಮೂಲಗಳಾಗಿವೆ. 

ನವಿಕರಿಸಬಹುದಾದ ಇoಧನ ಮೂಲಗಳಲ್ಲಿ ಸೂರ್ಯನ ಬೆಳಕು ಎಲ್ಲಾ ಸ್ಥಳಗಳಲ್ಲಿ  ಸುಲಬವಾಗಿ  ದೊರೆಯುವ ಸಾದನ ವಾಗಿದೆ .ಆದರೆ ಇತರೆ ನವಿಕರಿಸಬಹುದಾದ ಇoಧನ ಮೂಲಗಳಾದ ಪವನಶಕ್ತಿ ಮತ್ತು ಕಿರುಜಲ  ಮೂಲಗಳು ಸ್ಥಳ ನಿರ್ದಿಷ್ಟವಾಗಿವೆ.  ಸೂರ್ಯನ ಬೆಳಕನ್ನು ಶಾಕವನ್ನಾಗಿ  ಪರಿವರ್ತಿಸಿ ನೀರನ್ನು ಕಾಯಿಸುವ ತಂತ್ರಜ್ಞ್ಯಾನ  (ಸೋಲಾರ್ ಥೆರ್ಮಲ ) ಮತ್ತೊಂದು  ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞ್ಯಾನ  ಸೋಲಾರ್ ಫೋಟೋ ವೋಲ್ಟಾಇಕ  ಎಂದು ರಾಜ್ಯದಲ್ಲಿ ಬಿಸಿ ನೀರೆಗಾಗಿ ಬಹಳಷ್ಟು ಮನೆಗಳಲ್ಲಿ ಸೋಲಾರ್ ವಾಟರ್ ಹೀಟ್ ರಗಳನು ಅಳವಡಿಸಿ ಕೊಳ್ಳ  ಲಾಗಿದೆ .ಇದು ಅಂತಹ ದುಬಾರಿ ಇಲ್ಲದಾದರು   ಅವರವರ ಮನೆಗಳಲ್ಲಿ ಕಡಿಮೆ ವೆಚ್ಚ ಭರಿಸಿ ಅಳವಡಿಸ ಕೊಳ್ಳಬಹುದಾದ ಪರಿಸರ ಸ್ನೇಹಿ ತಂತ್ರಜ್ಞ್ಯಾನ ವಾಗಿದೆ .ಇದರಿಂದ ಸಾರ್ವಜನಿಕರಿಗೆ ಎರಡು ಬಗೆಯ ಪ್ರಯೋಜನವಾಗಲಿದೆ  ಅಲ್ಲದೆ ಕರ್ನಾಟಕ ಸರ್ಕಾರ ದಿಂದ ಪ್ರತಿ ಯುನಿಟ್ಗೆ  ೦.40 ಪೈಸೆ ಯಂತೆ ಗರಿಷ್ಟ ರೂ 50 ನ್ನು ಮಾಸಿಕ ಬಿಲ್ಲಿ ನಲ್ಲಿ  ಕಡಿತ ಗೋಳಿಸ ಲಾಗುತಿದೆ .

 ಇದುವರೆಗೆ ಬೆಂಗಳೂರು ನಗರದಲ್ಲಿ ಸುಮಾರು 15 ಲಕ್ಷ  ಚ. ವೀ . ವಿಸ್ತಿರ್ಣ್ಣ ದಲ್ಲಿ   ಸೋಲಾರ್ ವಾಟರ್ ಹೀಟರ್ ಗಳನ್ನು ಅಳವಡಿಸಿ ಕೊ೦ಡಿರುವದಿಂದ ಪ್ರತಿ 100 ಲೀಟರ್ ನೀರು ಕಾಯಿಸಲು 2  ಚ ವೀ  ಕಲೆ ಕ್ಷರ್  ಪ್ರದೆಶದಂತೆ ದ0ತೆ ,ಇಂತಹ ಒಂದು ವಾಟರ್ ಹೀಟರ್ ಪ್ರತಿನಿತ್ಯ 4  ಯುನಿಟ್  ವಿದ್ಯುತ್ ಉಳಿಸಲು ಸಾಧ್ಯವಾಗಿದ್ದು ಅಂದಾಜಿನ ಪ್ರಕಾರ ಪ್ರತಿ ನಿತ್ಯ 200  ಮೆ ವಾ ವಿದ್ಯುತ್  ಉಳಿತಾಯ ಮಾಡಿದಂತಾಗಿದೆ . ಬೆಂಗಳುರಿನಲ್ಲಿ ಮಳೆಗಾಲದ 2  ತಿಂಗಳು ಮಾತ್ರ  ಮೋಡ ಗಳಿರುವುದರಿಂದ ತುಂಬ ಮೋಡ ಕವಿದಿರುವ ದಿವಸಗಳನ್ನು   ಹೊರೆತು ಪಡಿಸಿದರೆ ವರುಷದ 300  ದಿನಗಳಲಿ ಬಿಸಿ ನೀರು ಪಡೆಯಲು ಯಾವುದೇ ಸಮಸ್ಯ ಇರುವುದಿಲ್ಲ . ಈ ಯಂತ್ರ ಗಳನ್ನು ಮನೆಗಳಲಿ ಅಳವಡಿಸಿಕೊಳುವದರಿಂದ  ಎಲ್ಲಾ ಸರಕಾರಿ ಸೌಮ್ಯದ ಬಾಂಕುಗಳ  ಮೂಲಕ ಶೇ  2  ರ ಬಡ್ಡಿದರದಲ್ಲಿ  ಸಾಲ ದೊರೆಯುತ್ತದೆ .ನಮ್ಮ ಪರಿಸರದಲ್ಲಿ  ಹೇರಳವಾಗಿ ದೊರೆಯುವ ಸೂರ್ಯನ ಬೆಳಕನ್ನು ಮನೆಮನೆಯಲ್ಲಿ ಸೋಲಾರ್  ಫೋಟೋ ವೋಲ್ಟಾಇಕ  ಪನೆಲ್ ಗಳಿಂದ  ವಿದ್ಯುತ್ ಉತ್ಪಾದಿಸಿ ರಾತ್ರಿ ಸಮಯದಲ್ಲಿ ಬೆಳಕನ್ನು ಪಡೆಯಲು ಸಾರ್ವಜನಿಕರು ಪ್ರಯತ್ನಿಸಬೇಕಿದೆ . ಹಗಲಿನ ಸೂರ್ಯನನ್ನು ರಾತ್ರಿ ಬೆಳಗಿಸುವಂತೆ ಮಾಡಿ ,ಕತ್ತಲೆ ಇಂದ  ಬೆಳಕಿನತ್ತ ಮುನ್ನಡೆಯಬೇಕಿದೆ .ಇದಕೆ  ಇಚ್ಚಾಶಕ್ತ್ತಿ ಒಂದಿದರೆ  ಸಾಕು .

ಸೂರ್ಯನ ಬೆಳಕಿನಿಂದ   ವಿದ್ಯುತ್ ಪಡೆಯುವುದು ದುಬಾರಿ ತಂತ್ರಜ್ಞ್ಯಾನವಾಗಿದ್ದು  ಭಾರತ ಇತ್ತೀಚಿಗೆ  ಗೋಷಣೆ ಯಾಗಿರುವ '' ಜವಾಹರ ಲಾಲ್ ರಾಷ್ಟೀಯ ಸೋಲಾರ್ ಮಿಷನ್ ''   ಕಾರ್ಯಕ್ರಮದ ಅಡಿ  ಮನೆಗಳ ಚ್ಚವನಿಯ ಮೇಲೆ ಸೋಲಾರ್ ಪಾನೆಲ್ ಗಳಿಂದ ವಿದ್ಯುತ್ ಉತ್ಪಾದಿಸುವದನ್ನು ಪ್ಪ್ರೋತ್ಸಾಹಿಸಲಾಗುತ್ತಿದೆ . ಸೂರ್ಯನ ಬೆಳಕನ್ನು ಉಪಯೋಗಿಸಿ ಕೊಂಡು ಅಡುಗೆ ತಯಾರಿಸಲು ಸಹ ತಂತ್ರಜ್ಞ್ಯಾನ ಲಭ್ಯವಿದ್ದು  ಈಗಾಗಲೇ ಕೆಲವು ಪುಣ್ಯ ಕ್ಷೇತ್ರ ಗಳಿಗೆ ಬೇಟಿ  ನಿಡುವ ಭಕ್ತಾದಿಗಳಿಗೆ ಅಡುಗೆ ತಯಾರಿಸಲು ದೊಡ್ಡ ಪ್ರಮಾಣದ  ಸೋಲಾರ್  ಥೆರ್ಮಲ್ ಕುಕ್ಕಿಂಗ್ ವ್ಯವಸ್ತೆ ಗಳನ್ನು  ಕರ್ನಾಟಕ ರಾಜ್ಯ ದ  ಶ್ರಿಂಗೇರಿ  ಕ್ಷೇತ್ರ ದಲ್ಲಿ  ತಿರುಪತಿ ತಿರುಮಲ ದೇವಸ್ಥಾನ ದಲ್ಲಿ,  ಮೌಂಟ್ ಅಬು (ರಾಜಸ್ತಾನ) ,ಶಿರಡಿ ಸಾಯಿಬಾಬ ಕ್ಷೇತ್ರ (ಮಹಾರಾಷ್ಟ್ರ) ದಲ್ಲಿ ಅನುಷ್ಠಾನ ಗೊಳಿಸಲಾಗಿದೆ  . ಇಂತಹ ಯೋಜನೆ ಗಳ  ಅನುಷ್ಠಾನಕ್ಕೆ  ಶೇ 40  ರಷ್ಟು ಯೋಜನಾ ವಚ್ಹ ವನ್ನು  ಸರಕಾರವೇ ಬರಿಸುತ್ತದೆ .ಇದೊಂದು ಅತ್ಯಂತ ಸ್ವಚ್ಹ ಹಸಿರಿನ ತಂತ್ರಜ್ಞ್ಯಾನವಾಗಿದ್ದು  ಯಾವುದೇ ಮರಗಳನ್ನು  ಕಡಿದು ಉಪಯೋಗಿಸದೇ  ಪರಿಸರ ಸ್ನೇಹಿ ತಂತ್ರಜ್ಞ್ಯಾನ  ದೊಡ್ಡ ಪ್ರಮಾಣ ದಲ್ಲಿ  ಅಡುಗೆ ತಯಾರು ಮಾಡುವಂತೆ ಹೋಟೆಲ್ ಗಳು  ಕಲ್ಯಾಣ ಮಂಟಪಗಳು  ಆಸ್ಪತ್ರೆಗಳು .ಹಾಗೂ ಪ್ರವಾಸಿ ಸ್ಥಳಗಳಲ್ಲಿ  ಅನುಷ್ಠಾನಗೊಳಿಸುವುದರಿಂದ  ಪರಿಸರ ರಕ್ಷಣೆ  ಮಹತ್ವ ಕಾರ್ಯದಲ್ಲಿ ತೊಡಗಿಸಿ ಕೊಂಡ೦ತಾಗುವುದು .

 ಸೂರ್ಯನ ಬೆಳಕಿನಿಂದ ವಿದ್ಯುತ್ ಅನ್ನು ಪಡೆಯಲು ತಂತ್ರಜ್ಞ್ಯಾನ ದುಬಾರಿಯೇನಿಸಬಹುದಾದರು  ,ನಾವು ಮಾಡುತಿರುವ ವೆಚ್ಚದ  ಬಗ್ಗೆ ಲೆಕ್ಕ ಹಾಕಿದೆರೆ ಅಷ್ಟೇನು ದುಬಾರಿಯೇನಿಸಲಾರದು . ಇಂದು ಸ್ಥಿತಿವಂತರು  ಸೂರ್ಯನ ಬೆಳಕನ್ನು ಉಪಯೋಗಿಸಿ  ವಿದ್ಯುತ್ ಪಡೆದಲ್ಲಿ .ಈ ರೀತಿ ಯಾಗಿ  ಉಳಿತಾಯ ವಾಗುವ  ವಿದ್ಯುತ್ಅನ್ನು ಉತ್ಪಾದನಾ ಕ್ಷೇತ್ರ ಗಳಿಗೆ , ವಿಶೇಷ ವಾಗಿ  ರೈತ  ಸಮುದಾಯಕ್ಕೆ  ಒದಗಿಸದಲ್ಲಿ , ಈ ಕ್ಷೇತ್ರ ದಲ್ಲಿಯ  ಉತ್ಪಾದಕತೆಯನ್ನು  ಹೆಚ್ಹಿಸಿದ  ಕೀರ್ತಿಗೆ  ಕಾರಣ ರಾಗುವರು .ಇಂದು ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ ,ಕ್ರ್ಯೊಪ್ನ ಮುಕ ರಾದರೆ  ಇಂದಿನ   ವಿದ್ಯುತ್ ಸಮಸ್ಯೆ ಪರಿಹಾರ ಕಂಡು ಕೊಂಡ ತಾಗುವುದು .
  ಪ್ರಜಾವಾಣಿ ದಿನಪತ್ರಿಕೆ ಯಲ್ಲಿ 13-04-2010  ರಂದು ಪ್ರಕಟವಾದ ಲೇಖನ 

2 comments:

  1. Informative Article Sir..Uttara Kannada district has 6 dams and 1 nuclear reactor.. IISc studies ahown that Uttara Kannada and Dakhina Kannada district have Wind and Solar enrgy favourable conditions.. Why the govt is not investing in these renewble areas so that we save the land that get submerged in the name of DAM.. ???

    ReplyDelete
  2. Now i am not in the renewable energy dept..so i cannot say any thing in this regard.thankyou

    ReplyDelete